ಎಸ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕುಮಾರ್.ಎನ್. ಬೆಳವಾಡಿ ನಿರ್ಮಿಸಿರುವ ಹಾಯ್ ಕೃಷ್ಣ ಚಿತ್ರಕ್ಕೆ ನಮ್ಮ ನಾಯಕ ಈ ವಿನಾಯಕ, ಮಿಂಚಾಗಿ ಬಾನಿಂದ ಬಂದವಳೆ, ಮಳೆಬಿಲ್ಲಿನಂತಿದೆ ಆ ನಿನ್ನ ಮೈಸಿರಿ, ಓ ವಿಧಿಯೇ ಇದು ಸರಿಯೇ, ರೋಮಾಂಚನ ಒಲವಿನ ಅಮಲಲಿ, ಈ ಗೀತೆಗಳು ದಿ ಕ್ಲಬ್, ಮಂಚಿನಬೆಲೆ ಡ್ಯಾಂ, ಬಿಡದಿ, ಮೈಸೂರು ನಾರ್ತ್ ಬ್ಲಾಕ್ನಲ್ಲಿ ನಡೆದು ಚಿತ್ರೀಕರಣ ಮುಕ್ತಾಯಗೊಂಡಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ರಾಯ್ ಕೊಳ್ಳೇಗಾಲ, ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ, ರಮೇಶ್, ಸಂಕಲನ ದಾಮೋದರ್, ಸಾಹಸ, ಡಿಫರೆಂಟ್ ಡ್ಯಾನಿ, ನೃತ್ಯ ಧನಕುಮಾರ್, ಹೈಟ್ ಮಂಜ, ಸಾಹಿತ್ಯ ರಾಂನಾರಾಯಣ್, ಎ.ಟಿ. ರವೀಶ್, ವೇಣು ಕೃಷ್ಣ, ನವೀನ್, ತಾರಾಗಣದಲ್ಲಿ ಕೃಷ್ಣ ಸುಪ್ರಿಯ, ಶೃತಿರಾಜ್, ವಿಜಯಲಕ್ಷ್ಮಿ, ಬಿರಾದರ್, ಮಂಡ್ಯ ಜಯರಾಂ, ಮಮತ, ಡ್ಯಾನಿ, ಶಂಕರ ನಾರಾಯಣ್, ಸತ್ಯ, ಸುನಿಲ, ಉಮೇಶ್ (ಪುಂಗ), ಜಯಲಕ್ಷ್ಮಿ ಮತ್ತಿತರರು ಅಭಿನಯಿಸಿದ್ದಾರೆ.